Home » ನೂತನವಾಗಿ ಸಪ್ತ ಸಚಿವರಿಗೆ ಖಾತೆ ಹಂಚಿಕೆ: ಯಾರು ಯಾರಿಗೆ ಯಾವ ಖಾತೆ ಲಿಸ್ಟ್‌ ಇಲ್ಲಿದೆ..

ನೂತನವಾಗಿ ಸಪ್ತ ಸಚಿವರಿಗೆ ಖಾತೆ ಹಂಚಿಕೆ: ಯಾರು ಯಾರಿಗೆ ಯಾವ ಖಾತೆ ಲಿಸ್ಟ್‌ ಇಲ್ಲಿದೆ..

by manager manager

ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ನೂತನವಾಗಿ 7 ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಹಲವು ಖಾತೆಗಳ ಮಹತ್ವದ ಬದಲಾವಣೆಯಲ್ಲಿ ಜೆ.ಸಿ ಮಾಧುಸ್ವಾಮಿ ರವರಲ್ಲಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬೊಮ್ಮಾಯಿಯವರಿಗೆ ಹೆಚ್ಚುವರಿಯಾಗಿ ವಹಿಸಿದ್ದಾರೆ. ಡಾ.ಕೆ ಸುಧಾಕರ್ ರವರ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿ ರವರಿಗೆ ನೀಡಲಾಗಿದೆ.

ಇನ್ನೂ ಗೋಪಾಲಯ್ಯ ರವರಲ್ಲಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ಉಮೇಶ್ ಕತ್ತಿ ರವರಿಗೆ ನೀಡಲಾಗಿದೆ. ಗೋಪಾಲಯ್ಯ ರವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಖಾತೆಯನ್ನು ವಹಿಸಲಾಗಿದೆ. ಕೆ.ಸಿ ನಾರಾಯಣ ಗೌಡ ಅವರಿಗೆ, ಪ್ರಭು ಚೌಹ್ಹಾಣ್‌ ರವರ ಹಜ್‌ ಮತ್ತು ವಕ್ಫ್‌ ಖಾತೆಯನ್ನು ನೀಡಲಾಗಿದೆ.

ನೂತನ ಸಚಿವರ ಖಾತೆ ಹಂಚಿಕೆಯ ಸಂಪೂರ್ಣ ಲಿಸ್ಟ್‌ ಇಲ್ಲಿದೆ.

ಉಮೇಶ್‌ ಕತ್ತಿ – ಆಹಾರ ಮತ್ತು ನಾಗರೀಕ ಪೂರೈಕೆ

ಬಸವರಾಜ ಬೊಮ್ಮಾಯಿ – ಗೃಹ ಹಾಗೂ ಕಾನೂನು ಮತ್ತು ಸಂಸದೀಯ ಇಲಾಖೆ

ಜೆ.ಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ

ಸಿಸಿ ಪಾಟೀಲ್ – ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ

ಕೋಟಾ ಶ್ರೀನಿವಾಸ್ ಪೂಜಾರಿ – ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ

ಡಾ.ಕೆ ಸುಧಾಕರ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಆನಂದ್ ಸಿಂಗ್ – ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ

ಸಿಪಿ ಯೋಗೇಶ್ವರ್ – ಸಣ್ಣ ನೀರಾವರಿ

ಪ್ರಭು ಚೌಹ್ಹಾಣ್ – ಪಶುಸಂಗೋಪನೆ

ಮುರುಗೇಶ್ ನಿರಾಣಿ – ಗಣಿ ಹಾಗೂ ಭೂವಿಜ್ಞಾನ

ಎಸ್. ಅಂಗಾರ – ಬಂದರು ಹಾಗೂ ಮೀನುಗಾರಿಕೆ

ಅರವಿಂದ್ ಲಿಂಬಾವಳಿ – ಅರಣ್ಯ

ಆರ್. ಶಂಕರ್ – ಪೌರಾಡಳಿತ ಹಾಗೂ ರೇಷ್ಮೆ

ಎಂಟಿಬಿ ನಾಗರಾಜ್ – ಅಬಕಾರಿ

ಕೆ.ಗೋಪಾಲಯ್ಯ – ತೋಟಗಾರಿಕೆ ಹಾಗೂ ಸಕ್ಕರೆ

ಕೆ.ಸಿ ನಾರಾಯಣ ಗೌಡ – ಯುವಜನ ಹಾಗೂ ಕ್ರೀಡೆ ಮತ್ತು ವಕ್ಫ್

You may also like