Home » ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗೆ 18 ಕೋಟಿ ರೂ ಹೆಚ್ಚುವರಿ ಅನುದಾನ: ಅಶ್ವತ್ಥ ನಾರಾಯಣ

ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗೆ 18 ಕೋಟಿ ರೂ ಹೆಚ್ಚುವರಿ ಅನುದಾನ: ಅಶ್ವತ್ಥ ನಾರಾಯಣ

by manager manager

ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ 2022-23ನೇ ಸಾಲಿನ ಪಿಂಚಣಿಗಾಗಿ 18.12 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ

ಶುಕ್ರವಾರ ಈ ವಿಚಾರ ತಿಳಿಸಿರುವ ಅವರು, ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದಲೇ ಸಾಕಷ್ಟು ಹಣವನ್ನು ಕ್ರೋಡೀಕರಿಸಿದೆ. ಎದುರಾಗಿದ್ದ ಅಲ್ಪ ಪ್ರಮಾಣದ ಕೊರತೆಯನ್ನು ಹೆಚ್ಚುವರಿ ಅನುದಾನದ ಮೂಲಕ ಬಗೆಹರಿಸಲಾಗಿದೆ ಎಂದಿದ್ದಾರೆ.

ಈ ಹಣವನ್ನು ಪಿಂಚಣಿಗೆ ಅಲ್ಲದೆ ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಜತೆಗೆ, ಖರ್ಚುವೆಚ್ಚಗಳ ವಿವರಗಳನ್ನು ವಿ.ವಿ.ಯ ಜಾಲತಾಣದಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

You may also like