Home » ಕೃಷಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಕೃಷಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

by manager manager

ಅರಣ್ಯ ಇಲಾಖೆಯ ವತಿಯಿಂದ ’ಕೃಷಿ ಅರಣ್ಯ ಪ್ರೋತ್ಸಾಹ’ ಯೋಜನೆಯಡಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಿ, ಬದುಕುಳಿದ ಸಸಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಸ್ಥಳೀಯ ವಲಯದ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ನಿಗಧಿತ ವಿವರಗಳು ಹಾಗೂ ನೊಂದಾವಣೆ ಶುಲ್ಕ ರೂ.10 ಜತೆಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದ್ದಾಗಿದ್ದು, ಜಮೀನಿನ ವಿವರಗಳಿರುವ ಪಹಣಿ (RTC) ಬರಹದ ನಕ್ಷೆ, ಜಮೀನಿನ ಚೆಕ್ಕುಬಂದಿ ಹಾಗೂ ರೈತರು ಜಮೀನಿನಲ್ಲಿ ನೆಡಲು ಬೇಕಾಗಿರುವ ಸಸಿಗಳ ಜಾತಿ, ಅಳತೆ, ಸಂಖ್ಯೆಯ ವಿವರಗಳ ದಾಖಲೆಗಳನ್ನು ನೊಂದವಣೆಯ ಸಮಯದಲ್ಲಿ ಅರ್ಜಿಯೊಂದಿಗೆ ಸಲ್ಲಿಸಬೇಕು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಭ್ಯವಿರುವ ಕಡೂರು ವಲಯದ ಸಸ್ಯ ಕ್ಷೇತ್ರದ ಹೆಸರು, ತಂಗಲಿ, ದೂರವಾಣಿ ಸಂಖ್ಯೆ: 9113602636, ಚಿಕ್ಕಮಗಳೂರು ವಲಯದ ಸಸ್ಯ ಕ್ಷೇತ್ರದ ಹೆಸರು, ಮತ್ತಾವರ, ದೂರವಾಣಿ ಸಂಖ್ಯೆ: 9886863585, ಮತ್ತೋಡಿ ವಲಯದ ಸಸ್ಯ ಕ್ಷೇತ್ರದ ಹೆಸರು, ಮಲ್ಲಂದೂರು, ದೂರವಾಣಿ ಸಂಖ್ಯೆ: 9426130810, ಆಲ್ದೂರು ವಲಯದ ಸಸ್ಯ ಕ್ಷೇತ್ರದ ಹೆಸರು, ಹಾಂದಿ, ದೂರವಾಣಿ ಸಂಖ್ಯೆ: 9448421702, ಮೂಡಿಗೆರೆ ವಲಯದ ಸಸ್ಯ ಕ್ಷೇತ್ರದ ಹೆಸರು, ಹಳೇಕೋಟೆ, ದೂರವಾಣಿ ಸಂಖ್ಯೆ: 8861013099 ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಸಹಾಯಧನ: ಅರ್ಜಿ ಆಹ್ವಾನ

You may also like