Home » ವಿಷ್ಣು ಮಂತ್ರದಲ್ಲಿನ ಮಹತ್ವವೇನು? ಪಠಿಸುವುದರಿಂದ ಆಗುವ ಪ್ರಯೋಜನಗಳೇನು?

ವಿಷ್ಣು ಮಂತ್ರದಲ್ಲಿನ ಮಹತ್ವವೇನು? ಪಠಿಸುವುದರಿಂದ ಆಗುವ ಪ್ರಯೋಜನಗಳೇನು?

by manager manager

21 Days Ganesh Vrat :

ಸಂಕಷ್ಟಹರ ಗಣಪತಿಯ ಪೂಜೆಯ ದೇವಾನುದೇವತೆಗಳಲ್ಲೆ ಅಗ್ರಪೂಜೆಯಾಗಿ ನಾವು ಆಚರಿಸುತ್ತೇವೆ. ನಿಮಗೆ ತಿಳಿದುರುವಂತೆ ನಾವು ಯಾವುದೇ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೊದಲು ಗಣೇಶನನ್ನು ನೆನೆದು ಪೂಜಿಸಿ ನಂತರವೇ ಬೇರೆ ಕೆಲಸ ಮಾಡುತ್ತೇವೆ, ಹೀಗಿರುವಾಗ ನಾವು ಗಣೇಶ ಚತುರ್ಥಿಯನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದರೆ ಮಾತ್ರ ನಮಗೆ ಫಲವು ಲಭಿಸುತ್ತದೆ. ಪೂಜೆಯನ್ನು ಭಾದ್ರಪದ ಶುದ್ಧ ಚತುರ್ಥಿಯ ದಿನದಿಂದ ಪ್ರಾರಂಭವಾಗಿ ಭಾದ್ರಪದ ಮಾಸದ (ಆಗಸ್ಟ್ ಮಧ್ಯದಿಂದ ಪ್ರಾಂಭವಾಗಿ ಸೆಪ್ಟೆಂಬರ್ ಮಧ್ಯದವರೆಗೆ) ಚತುರ್ಥಿಯನ್ನು ಆಚರಿಸಿ ಅನಂತ ಚತುರ್ದಶಿ ದಿನದಂದು ಕೊನೆಗೊಳ್ಳುತ್ತದೆ. ಗಣೇಶ ಪೂಜೆ ವೇಳೆ, ಮಣ್ಣಿನ ಮೂರ್ತಿಯನ್ನು ಖರೀದಿಸಿದ ಸಮಯದಿಂದ ಹಿಡಿದು ನೀರಿನಲ್ಲಿ ಮುಳುಗಿಸುವವರೆಗೆ ಈ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ.

ಗಣೇಶ ಚತುರ್ಥಿಯನ್ನು ಪ್ರಾರಂಭಿಸುವ ಮೊದಲು ನಾವು ಮಾಡಬೇಕಾದ ಕೆಲಸಗಳು

– ಜೇಡಿ ಮಣ್ಣಿನ ಗಣಪತಿಯನ್ನು ತನ್ನಿ ಆಥವ ಮಣ್ಣಿನ ಗಣಪ ತರಲು ಆಗದಿದ್ದರೆ ನಿಮ್ಮ ಮನೆಯಲ್ಲಿ ಬೆಳ್ಳಿ ಗಣಪತಿ ಇದ್ದರೆ ಅದನ್ನಿಟ್ಟು ಪೂಜೆ ಮಾಡಿ.

– ಕುಂಕುಮವನ್ನು ತನ್ನಿ ಅದನ್ನು ಅರಿಶಿನದಿಂದ ತಯಾರಿಸಿರಬೇಕು, ಅರಿಶಿನ ಕೊಂಬುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಸ್ವಲ್ಪ ನೀರಿರುವ ಸುಣ್ಣ ಬೆರೆಸಿದಾಗ ಗಾಢ ಹಳದಿ ಬಣ್ಣದ ಪುಡಿಯು ಕೆಂಪು ಬಣ್ಣಕ್ಕೆ ಬದಲಾಗುತ್ತದೆ.

– ಅರಿಶಿನಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಮಂಗಳ ಕಾರ್ಯಗಳಲ್ಲಿ ಅರಿಶಿನವೇ ಪ್ರಧಾನ. ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ್ದು. ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರುಗ್ರಹ. ಇವನು ಹಳದಿ ಬಣ್ಣದ ಕಾರಕ. ಅಂದರೆ ಹಳದಿಯು ಜ್ಞಾನ ಎಂದರ್ಥ. ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಅರಿಶಿನ ಮಹತ್ವ ಪಡೆದಿದೆ.

– ಹೂವುಗಳನ್ನು ತನ್ನಿ ಮಹಾಭಾರತದಲ್ಲಿ ಉಲ್ಲೇಖವಾಗಿರುವ ಮಾಹಿತಿಯಂತೆ, ಯಾರು ಶುದ್ಧವಾದ ಮನಸ್ಸಿನಿಂದ ಧಾರ್ಮಿಕ ವಿಧಿ-ವಿಧಾನದ ಮೂಲಕ ದೇವರಿಗೆ ಹೂವನ್ನು ಅರ್ಪಿಸುತ್ತಾರೋ ಅಂತಹ ವ್ಯಕ್ತಿಗಳ ಬಗ್ಗೆ ದೇವರು ತೃಪ್ತನಾಗುತ್ತಾನೆ.

– ಐದು ವಿಧದ ಹಣ್ಣುಗಳನ್ನು ತನ್ನಿ ( ಮಾವಿನಹಣ್ಣು, ಬಾಳೆಹಣ್ಣು, ಕಿತ್ತಳೆ, ದ್ರಾಕ್ಷಿ ಸೇರಿ ಇತರೆ ಹಣ್ಣುಗಳು): ದೇವರಿಗೆ ಅರ್ಪಿಸಿದ ಹಣ್ಣುಗಳು ನಮ್ಮ ಬೇರ್ಪಡುವಿಕೆ, ಆತ್ಮತ್ಯಾಗ ಮತ್ತು ಶರಣಾಗತಿಯನ್ನು ಸಂಕೇತಿಸುತ್ತವೆ. ಅರ್ಪಿಸುವ ಹಣ್ಣುಗಳಂತೆ ನಮ್ಮ ಹೃದಯಗಳು ಸಿಹಿಯಾಗಿರಬೇಕು ಎಂದು ದೇವತೆಯ ಮನವಿಯಾಗಿಯೂ ಇದು ಕಂಡುಬರುತ್ತದೆ.

– ತೆಂಗಿನಕಾಯಿಯನ್ನು ನಾವು ಎಂದಿಗೂ ಇದ್ದ ಹಾಗೆಯೇ ಅರ್ಪಿಸುವುದಿಲ್ಲ. ಕಾಯಿ ಜುಂಗು ತೆಗೆದು ಮತ್ತು ಹೊರಗಿನ ನಾರುಗಳಿಂದ ಮುಕ್ತವಾದ ಹಣ್ಣುಗಳನ್ನು ನೀಡುತ್ತೇವೆ. ಆಗ ಮಾತ್ರ ತೆಂಗಿನಕಾಯಿ ಒಡೆಯಲು ಸಾಧ್ಯ. ತೆಂಗಿನಕಾಯಿ ಒಡೆಯುವ ಮೂಲಕ ಅದರಲ್ಲಿರುವ ಎಳನೀರು ಹೊರಹೋಗುತ್ತದೆ.

– ವೀಳ್ಯದೆಲೆ ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ, ಪೂಜೆ ಹೀಗೆ ಎಲ್ಲ ಮಂಗಳ ಕಾರ್ಯಗಳಿಂದ ಹಿಡಿದು ವಿವಿಧ ರೀತಿಯ ಸಮಾರಂಭಗಳಲ್ಲೂ ಬೇಕೆ ಬೇಕು. ವೀಳ್ಯದೆಲೆಯಲ್ಲಿ ದೇವತೆಗಳು ವಾಸ ಮಾಡುತ್ತವೆ ಎಂಬ ನಂಬಿಕೆ ಇದೆ. ಎಲೆಯ ತುದಿಯಲ್ಲಿ – ಲಕ್ಷ್ಮೀವಾಸ, ಎಲೆಯ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ, ಎಲೆಯ ಮಧ್ಯದಲ್ಲಿ ಸರಸ್ವತೀ ದೇವಿ, ಎಲೆಯ ಎಡಭಾಗದಲ್ಲಿ ಪಾರ್ವತೀ ದೇವಿ, ಎಲೆಯ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ, ಎಲೆಯ ಹಿಂಭಾಗದಲ್ಲಿ ಚಂದ್ರದೇವತೆ ವಾಸ, ಎಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ, ಎಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ, ಎಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯ ಲಕ್ಷ್ಮೀ ಇರುತ್ತಾರೆ ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ.

– ಗಣೇಶನನ್ನು ಆರಾಧಿಸುವ ವೇಳೆ ಅಡಿಕೆಯೊಂದನ್ನು ಹಳದಿ ಬಟ್ಟೆಯಲ್ಲಿರಿಸಿ ದೇವರ ಮುಂದಿರಿಸಬೇಕು. ಜೊತೆಗೆ, ಕುಂಕುಮ, ಅರಿಶಿನ ಮತ್ತು ಅಕ್ಕಿಯನ್ನು ಅರ್ಪಿಸುತ್ತಾ ಲಕ್ಷ್ಮೀದೇವಿಯನ್ನು ಸ್ತುತಿಸುವ ಮಂತ್ರವನ್ನು ಪಠಿಸಿ.

– ಗಣಪತಿಗೆ ಎಷ್ಟು ಆಹಾರ ತಿಂದರೂ ಸಾಕಾಗುತ್ತಿರಲಿಲ್ಲವಂತೆ. ಆಗ ತಾಯಿ ಪಾರ್ವತಿಯು ಗರಿಕೆ ರಸದೊಂದಿಗೆ ಹಾಲು ಬೆರೆಸಿದ ಪಾನೀಯವನ್ನು ಕುಡಿಯಲು ಕೊಟ್ಟಾಗ ತೃಪ್ತಿಯಿಂದ ಕುಡಿದು ತೇಗುತ್ತಿದ್ದನಂತೆ. ಈ ಹಿನ್ನೆಲೆ ಗಣಪತಿಯ ಆರಾಧನೆಯಲ್ಲಿ ಗರಿಕೆಗೆ ಪ್ರಥಮ ಸ್ಥಾನ.

– ಪಂಚಾಮೃತಗಳಾದ ಹಾಲು, ಮೊಸರು, ಜೇನು ತುಪ್ಪ, ಸಕ್ಕರೆ, ತುಪ್ಪ ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಲಿನ ಅಭೀಷೇಕದಿಂದ ದೀರ್ಘಾಯುಷ್ಯ, ಜೇನುತುಪ್ಪದಿಂದ ಉತ್ತಮ ಧ್ವನಿ-ಸಂಗೀತ ಸಿದ್ಧಿಯಾಗುತ್ತದೆ. ಇದೇ ರೀತಿ ಪಂಚಾಮೃತ ಅಭಿಷೇಕದಿಂದ ಅನೇಕ ಉಪಯೋಗಗಳಿವೆ.

– ಧಾರ್ಮಿಕ ಪೂಜೆಗಳು ಹಾಗೂ ವ್ರತಗಳಲ್ಲಿ ಶ್ರೀಗಂಧದ ಮರದ ಗಂಧವನ್ನು ಬಳಸುವುದು ಸರ್ವೇಸಾಮಾನ್ಯ. ಧಾರ್ಮಿಕ ಉದ್ದೇಶಗಳಿಗಾಗಿ ಬಳಸುವ ಪಾತ್ರೆಗಳಿಗೆ ಲೇಪಿಸಲು ಹಾಗೂ ದೇವತೆಗಳ ವಿಗ್ರಹಗಳನ್ನು ಅಲಂಕರಿಸಲು ಬಳಸಲಾಗುತ್ತದೆ.

– ಕೆಂಪು ಪವಿತ್ರ ದಾರ(ಮೌಳಿ ದಾರ) ಕಟ್ಟಿದರೆ ಯಾವುದೇ ಕೇಡು ಸಂಭವಿಸುವುದಿಲ್ಲ, ಮೃತ್ಯು ಅಷ್ಟು ಬೇಗ ಸಮೀಪಿಸುವುದಿಲ್ಲ ಎಂಬ ಮಾತಿದೆ. ಹೆಚ್ಚಿನ ಕಾಲ ಸುಖವಾಗಿ ಬದುಕುತ್ತಾರೆ ಎಂದೂ ಹೇಳಲಾಗಿದೆ. ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರರು, ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮೀ, ಪಾರ್ವತಿಯರು ಕಾಪಾಡುತ್ತಾರೆ. ಯಾವುದೇ ಕಷ್ಟಗಳನ್ನೂ ಬರದಂತೆ ಕಾಪಾಡುತ್ತಾರೆ ಎಂಬ ಮಾತುಗಳಿವೆ. ಹಾಗಾಗಿ ಮೌಳಿ ದಾರವನ್ನು ಕಟ್ಟುತ್ತಾರೆ.

– ಊದುಬತ್ತಿಯನ್ನು ದೇವರ ಮುಂದೆ ಉರಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣವಿದೆ. ಗಾಳಿಯಲ್ಲಿ ಹರಡುವ ಅಗರಬತ್ತಿಯ ಪರಿಮಳ ದೇವರನ್ನು ಹೋಗಿ ಸೇರುತ್ತದೆ ಎಂಬ ಕಾರಣ ಇದರ ಹಿಂದೆ ಅಡಗಿದೆ. ಜತೆಗೆ, ನಿಮ್ಮ ಆಲೋಚನೆಗಳನ್ನು ಇದು ಶುದ್ಧ ಮತ್ತು ಸುಂದರವಾಗಿಸುತ್ತದೆ ಎಂಬ ನಂಬಿಕೆಯೂ ಇದೆ.

– ಧೂಪವನ್ನು ಹಚ್ಚುವುದರಿಂದ ಅನೇಕ ಶುಭ ಲಾಭಗಳಿವೆ. ಅಲ್ಲದೆ, ಷೋಡೋಪಚಾರ ಪೂಜೆಗಳಲ್ಲಿ ಒಂದು ಈ ಧೂಪ. ” ದೇವತೆಗಳು ಸುಗಂಧಗಳನ್ನು ಪ್ರೀತಿಸುತ್ತವೆ” ಎಂಬ ಹೇಳಿಕೆಯು ಪುರಾತನ ಐಗುಪ್ತ್ಯರಲ್ಲಿ ಸಾಮಾನ್ಯವಾಗಿತ್ತು.

– ಕರ್ಪೂರ ದೇವರ ಪೂಜೆಗೆ ಕರ್ಪೂರ ಬಹಳ ಮುಖ್ಯವಾದುದಾಗಿದೆ.ಕರ್ಪೂರದ ಮಂಗಳಾರತಿ ಆಗದೆ ದೇವರ ಪೂಜೆಗೆ ಅಂತ್ಯವಿಲ್ಲ.

– ಗಂಗಾ ಜಲ ಪವಿತ್ರವಾದದ್ದು. ಸೂಕ್ತ ಸ್ಥಳದಲ್ಲಿ ಗಂಗಾ ಜಲವನ್ನಿಟ್ಟರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಇದೇ ರೀತಿ ಧಾರ್ಮಿಕ ಪೂಜೆಗಳಲ್ಲೂ ಗಂಗಾಜಲದ ಪಾತ್ರ ಮಹತ್ವವಾದದ್ದು.

– ಗುಲಾಬಿ ನೀರು

– ಜನಿವಾರವನ್ನು ಗಾಯತ್ರಿ ಮಂತ್ರವನ್ನು ವಾಚಿಸುವ ಅರ್ಹತೆಯಿದ್ದ, ಬ್ರಹ್ಮಗ್ರಂಥಿ ಎಂಬ ಗಂಟಿನಿಂದ ಕೂಡಿಸಲ್ಪಟ್ಟ ಮೂರೆಳೆಯ ಪವಿತ್ರ ದಾರವೇ ಯಜ್ಞೋಪವೀತ.ಇದನ್ನು ಧರಿಸದವರಿಗೆ ಯಜ್ಞಗಳನ್ನು ಮಾಡುವ ಅಧಿಕಾರವಿರುವುದಿಲ್ಲ. ಬ್ರಹ್ಮಸೂತ್ರ, ಪೂನಲ್, ಜನಿವಾರ ಹೀಗೆ ಬೇರೆ ಬೇರೆ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಹಂಕಾರ, ಕೋಪ ಮತ್ತು ಸ್ವಾರ್ಥದ ಪರಿತ್ಯಾಗಕ್ಕೆ ಇದು ಸಂಕೇತ.

– ಕಲಶದಲ್ಲಿ ವೀಳ್ಯದೆಲೆ ಇಟ್ಟು ಅದರ ಮೇಲೆ ತೆಂಗಿನ ಕಾಯಿ ಇಟ್ಟು ಪೂಜೆ ಮಾಡುವುದು ಸಾಮಾನ್ಯ. ಸತ್ಯನಾರಾಯಣ ವ್ರತ, ನಾಗರ ಪಂಚಮಿ, ವಿನಾಯಕ ಚತುರ್ಥಿ, ವರಮಹಾಲಕ್ಷ್ಮಿ, ಸೋಮವಾರ ವ್ರತ, ಸ್ವರ್ಣ ಗೌರಿ, ಮಂಗಳ ಗೌರಿ, ಅನಂತಪದ್ಮನಾಭ ವ್ರತ ಇತ್ಯಾದಿ ಹಲವು ಎಲ್ಲಾ ಪೂಜೆಗಳಲ್ಲಿಯೂ ಕಲಶವೇ ಪ್ರಧಾನ ಪಾತ್ರ ವಹಿಸುತ್ತದೆ.

– ಮಹಾನೈವೇದ್ಯವಾದ ಮೋದಕ, ಮನೆಯಲ್ಲಿ ಬೇಯಿಸಿದ ನಿಯಮಿತ ಆಹಾರ. ಯಾವುದಾದರೂ ಒಂದು ರೀತಿಯ ಸಿಹಿ ತಿಂಡಿ. ಉದಾ: ಪೇಢ / ಬರ್ಫಿ / ಲಾಡು / ಖೀರ್ ಇತ್ಯಾದಿ. ಗಣೇಶನಿಗೆ ಸಿಹಿ ತಿಂಡಿಗಳೆಂದರೆ ಪಂಚಪ್ರಾಣ. ಅದರಲ್ಲೂ ಮೋದಕವೆಂದರೆ ಅಚ್ಚುಮೆಚ್ಚು ಎನ್ನಲಾಗುತ್ತದೆ. ಈ ಹಿನ್ನೆಲೆ ವಿನಾಯಕನನ್ನು ಮೆಚ್ಚಿಸಲು ಚತುರ್ಥಿ ವೇಳೆ ಗಣೇಶನ ಮೂರ್ತಿ ಬಳಿ ಸಿಹಿ ತಿಂಡಿಗಳನ್ನು ಇಡಲಾಗುತ್ತದೆ.

ಅಲಂಕಾರಿಕ ಗಣೇಶ ಚತುರ್ಥಿ ಪೂಜಾ ವಸ್ತುಗಳು

– ರಂಗೋಲಿ ಬಣ್ಣಗಳಾದ ಗುಲಾಲ್ (ಗುಲಾಬಿ ಪುಡಿ), ಬುಕ್ಕಾ (ಕಪ್ಪು), ಶೆಂದೂರ್ ( ಗಾಢ ಕಿತ್ತಳೆ), ಇವುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ವಿನ್ಯಾಸಗಳನ್ನು ತಯಾರಿಸಲು ಪೇಸ್ಟ್ ಆಗಿ ತಯಾರಿಸಲಾಗುತ್ತದೆ.

– ತೋರಣ ( ಬಾಗಿಲಿಗೆ ಹಾಕಲು )

– ಬಾಳೆಹಣ್ಣು, ಸೇಬು, ಮಾವು, ಕಿತ್ತಳೆ, ದ್ರಾಕ್ಷಿ, ಪೀಚ್ ಮತ್ತು ಪಿಯರ್ ಮುಂತಾದ 5 ವಿಧಗಳ ಹಣ್ಣುಗಳು. 5 ಎಳನೀರು, 20-30 ಹೂವುಗಳು, 10 ಪಂಚ ಖಾದ್ಯ (ಗೋಡಂಬಿ, ಬಾದಾಮಿ, ಒಣ ಖರ್ಜೂರ, ಪಿಸ್ತಾ ಮತ್ತು ಒಣ ಹಣ್ಣುಗಳು).

– ಪೂಜೆಗೆ ಅಗತ್ಯವಾದ ಪಾತ್ರೆಗಳು 2 ಉಕ್ಕು ಅಥವಾ ಬೆಳ್ಳಿ ಫಲಕಗಳು (ಒಂದು ಆರತಿಗೆ ಮತ್ತು ಇನ್ನೊಂದು ಪೂಜಾ ವಸ್ತುಗಳನ್ನು ಹಿಡಿದಿಡಲು).

– ಒಂದು ಬೌಲ್ ( ನೀರನ್ನು ಹಿಡಿದಿಡಲು ).

– 1 ಸ್ಟೇನ್‍ಲೆಸ್ ಸ್ಟೀಲ್ ಹೂಜಿ (1/2 ಗ್ಯಾಲನ್).

– 2 ಉಕ್ಕು / ತಾಮ್ರದ ಬಟ್ಟಲುಗಳು (ತುಪ್ಪ ಮತ್ತು ಎಣ್ಣೆಗೆ).

– ಆರತಿಗೆ ಬೇಕಾದ ಹಿತ್ತಾಳೆ ದೀಪ

– ಅಕ್ಕಿ ಮತ್ತು ಪವಿತ್ರ ನೀರಿಗಾಗಿ 2 ತಾಮ್ರದ ಮಡಿಕೆಗಳು

– ತಿನ್ನಲು ಮತ್ತು ಕುಡಿಯಲು ತಾಮ್ರ ಫಲಕಗಳು ಮತ್ತು ಚಮಚಗಳು (ಪಂಚಪತ್ರ ಮತ್ತು ಪಾಲಿ).

ಗಣೇಶ ಚತುರ್ಥಿಗೆ ಈ ಮೇಲ್ಕಂಡ ಪೂಜಾ ವಸ್ತುಗಳೊಂದಿಗೆ ಗಣೇಶನನ್ನು ಪೂಜಿಸಲಾಗುತ್ತದೆ. ಹಬ್ಬವನ್ನು ಪ್ರಾರಂಭದಿಂದಲೂ ಸರಾಗವಾಗಿ ಯಾವುದೇ ವಿಘ್ನವಿಲ್ಲದೆ ನಡೆಸಲು ಈ ಎಲ್ಲ ವಸ್ತುಗಳನ್ನು ಗಣೇಶ ಚತುರ್ಥಿಗೂ ಮೊದಲೇ ಖರೀದಿಸಿರಬೇಕು.

ವಿಷ್ಣು ಮಂತ್ರದಲ್ಲಿನ ಮಹತ್ವವೇನು? ಪಠಿಸುವುದರಿಂದ ಆಗುವ ಪ್ರಯೋಜನಗಳೇನು?